ವಿಜಯ್ ರಾಘವೇಂದ್ರ ನಟಿಸಿದ್ದ ಕದ್ದ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಸುಹಾಸ್ ಕೃಷ್ಣ ಅವರು ಡಾ. ಬಿ ಎ ದೀಪಿಕಾ ಅವರೊಂದಿಗೆ ಹೊಸ ಜೀವನ ಆರಂಬಿಸಿದ್ದಾರೆ.
ಜಯಹಲ್ ಪ್ಯಾಲೇಸ್ ನಲ್ಲಿ ನಡೆದ ಮದುವೆಯಲ್ಕಿಬ ಎರಡೂ ಕಡೆಯ ಕುಟುಂಬದ ಸದಸ್ಯರು, ಆಪ್ತರು, ಹಿತೇಷಿಗಳು ಭಾಗವಹಿಸಿ ನೂರ್ಕಾಲ ಬಾಳಲಿ ಎಂದು ಶುಭ ಹಾರೈಸಿದರು.
ಎಂ ಯಶೋಧ ಹಾಗು ಎಂ. ಆರ್ ದೇವರಾಜುಲು ಅವರ ಪುತ್ರ ಸುಹಾಸ್ ಕೃಷ್ಣ ಅವರು ವಿಜಯಲಕ್ಷಿ ಮತ್ತು ಬಿ ಆನಂದ್ ಪುತ್ತೂರು ಅವರ ಪುತ್ರಿ ದೀಪಿಕಾ ಅವರನ್ನು ವರಿಸಿದರು.
ನಿರ್ದೇಶಕ ಸುಹಾಸ್ ಕೃಷ್ಣ ಅವರು ಎ.ಎಸ್ ಮೂರ್ತಿ ಅಭಿನಯ ಶಾಲೆಯಲ್ಲಿ ಕಲಿತು ಬಂದವರು.